Return to BahaiPrayers.net   Facebook

(ಮಾರ್ಚ್ 21ನೇ ತಾರೀಖು ನೌರೂeóï ಇದು ಬಹಾಯಿ ವರ್ಷದ ಪ್ರಥಮ ದಿನ ಇದು ಸಂಭ್ರವದ ದಿನವಾಗಿದೆ.)

ಓ ನನ್ನ ಪರಮಾತ್ಮನೇ, ನೀನು ಧನ್ಯ. ನಿನ್ನ ಪ್ರೀತ್ಯರ್ಥವಾಗಿ ಹಾಗೂ ನಿನಗೆ ಅಸಹ್ಯವೆನಿಸುವ ಎಲ್ಲ ವಿಚಾರಗಳಿಂದಲೂ ದೂರದಿಂದಿರಲು ಸಂಕಲ್ಪಿಸಿ ಉಪವಾಸ ಮಾಡಿದವರಿಗೋಸ್ಕರ ನೀನು ನೌ-ರೂeóï ಸಂಭ್ರಮದ ಹಬ್ಬವನ್ನು ಗೊತ್ತುಪಡಿಸಿರುವೆ. ನಿನ್ನ ಪ್ರೀತಿಯ ಅಗ್ನಿ ಮತ್ತು ಉಪವಾಸದಿಂದ ಉತ್ಪನ್ನವಾದ ಶಾಖ ನಿನ್ನ ಧ್ಯೇಯೋದ್ದೇಶಗಳ ಸಲುವಾಗಿ ಧಗಧಗಿಸುವಂತೆ ಮಾಡಲಿ. ಅದು ಮಾತ್ರವಲ್ಲ, ಅವು ನಿನ್ನನ್ನು ಸ್ತುತಿಗೈಯುವುದರಲ್ಲಿ ಹಾಗೂ ಸ್ಮರಣೆ ಮಾಡುವುದರಲ್ಲಿ ನಿರತವಾಗುವಂತೆ ಕೃಪೆ ಮಾಡು, ಓ ಪ್ರಭುವೇ, ನೀನೇ ವಿಧಾಯಕಪಡಿಸಿದ ಉಪವಾಸದ ಆಭರಣದಿಂದ ಅವರನ್ನು ಸಿಂಗರಿಸಿರುವೆಯಾದ ಕಾರಣ ನಿನ್ನ ದಯೆ ಹಾಗೂ ಔದಾರ್ಯದ ಉಪಕಾರದಿಂದಲೂ ಮನ್ನಣೆಯಿಂದಲೂ ಕೂಡಿದಾ ಆಭರಣದಿಂದ ಸಹ ಅಲಂಕರಿಸುವವನಾಗು. ಮಾನವರ ನಡವಳಿಕೆಯೆಲ್ಲ ನಿನ್ನ ಸಮಾಧಾನ ಹಾಗೂ ಸಂತೋಷಚಿತ್ತದ ಅವಲಂಬನೆಯಾಗುತ್ತದೆ. ಅಷ್ಟೇ ಅಲ್ಲ, ನಿನ್ನ ಆಜ್ಞೆಯ ಆಧಾರದ ಮೇಲೂ ನಿಂತಿರುತ್ತದೆ. ಯಾರು ಉಪವಾಸವನ್ನು ಆಚರಿಸಿ, ಸತ್ಯಸಂಧನಾಗಿ ಮುಕ್ತಾಯಗೊಳಿಸುವನೋ ಅಂಥವನು ಚಿರಕಾಲದಿಂದಲೂ ಉಪವಾಸ ಮಾಡುತ್ತಿರುವವರ ಗುಂಪಿಗೆ ಸೇರಿಸಲ್ಪಡುವನು. ಅದಿಲ್ಲದೆ ನಿನ್ನ ಭಾವನೆಯಲ್ಲಿ ಯಾವನು ಉಪವಾಸವನ್ನು ಆಚರಿಸಿ ನಿಲ್ಲಿಸಿ ಬಿಡುವನೋ ಅವನು ನಿನ್ನ ಪವಿತ್ರ ಉದ್ದಿಶ್ಯಗಳಿಗೆ ಕಳಂಕ ತಂದವನೆಂದು ಪರಿಗಣಿಸಲ್ಪಡುವನು. ಈ ಜೀವಂತ ಚಿಲುಮೆಯ ಪರಿಶುದ್ಧವಾದ ಜಲದಿಂದ ಅವನು ಹೊರದೂಡಲ್ಪಡುವನು. ನಿನ್ನ ಮೂಲಕವೇ ನಿನ್ನ ಪ್ರಶಂಸನೀಯ ಕರ್ತವ್ಯ ಪ್ರಕಟವಾಗಿದೆ. ನಿನ್ನ ಆಜ್ಞೆಯ ಧ್ವಜವನ್ನೂ ಹಾರಿಸಿದೆ. ಇದನ್ನು ನಿನ್ನ ಆಜ್ಞಾಪಾಲಕರಿಗೆ ತಿಳಿಸು ಪ್ರಭುವೇ. ಎಲ್ಲ ವಸ್ತುಗಳ ಪವಿತ್ರತೆಯು ನಿನ್ನ ಇಚ್ಛೆ ಹಾಗೂ ಆದೇಶವನ್ನು ಅವಲಂಬಿಸುವುದೆಂದೂ ಅವರಿಗೆ ಗೊತ್ತು ಪಡಿಸು. ಅವರ ಪ್ರತಿ ಆಚಾರವೂ ನಿನ್ನ ಅನುಮತಿ ಮತ್ತು ಸಂತೋಷದ ವಿಧಿ ಬದ್ಧವಾಗಿದೆ. ಮಾನವರ ನಡವಳಿಕೆಗಳೆಲ್ಲವೂ ನಿನ್ನ ಸಮ್ಮತಿ ಮತ್ತು ಆಜ್ಞೆಗೆ ಅನುಸಾರವಾಗಿ ಉಳ್ಳದ್ದೆಂದು ಅಂಗೀಕರಿಸಬಹುದು. ಇದು ಅವರಿಗೆ ಗೊತ್ತಾಗುವಂತೆ ಮಾಡು. ಈ ದಿನಗಳಲ್ಲಿ ನಿನ್ನ ಸೌಂದರ್ಯದ ನೆಲೆಯಿಂದ ಯಾವುದೂ ಅವರನ್ನು ಮರೆಮಾಚಲು ಸಾಧ್ಯವಿಲ್ಲವೆಂದು ಅವರಿಗೆ ಸ್ಪಷ್ಟಪಡಿಸು. ಕ್ರಿಸ್ತ ಈ ದಿನಗಳಲ್ಲಿ ಹೀಗೆ ಹೇಳಿದ : “ಎಲ್ಲ ರಾಜ್ಯಗಳೂ ನಿನ್ನವು “ಓ ಚೈತನ್ಯ ಕರ್ತನೇ” ನಿನ್ನ ಮಿತ್ರ ಮೊಹಮ್ಮದ್ ಹೀಗೆ ಸಾರಿದ: “ ಓ ಉತ್ತಮೋತ್ತಮ ಪ್ರೀತಿಗೆ ಪಾತ್ರನಾದವನೇ, ನಿನ್ನ ಸೌಂದರ್ಯವನ್ನು ಬಹಿರಂಗಪಡಿಸಿರುವೆ. ನಿನ್ನ ವಿಶ್ವಾಸ ಪಾತ್ರರಿಗೆ, ಅತಿ ವೈಭವದ ನಿನ್ನ ಸಾಕ್ಷಾತ್ಕಾರದಲ್ಲಿ ಸ್ಥಾನ ಗಳಿಸುವ ಮಾರ್ಗವಾವುದು ಎಂಬುದನ್ನು ಖಚಿತಪಡಿಸಿರುವೆ. ಹೀಗೆ ನಿನ್ನ ಹೊರತು ಮಿಕ್ಕೆಲ್ಲ ವಸ್ತುಗಳಿಂದಲೂ ಬಾಹಿರರಾದವರನ್ನು ಬಿಟ್ಟು ಉಳಿದವರೆಲ್ಲ ದುಃಖಿಗಳಾಗಿರುವರು. ಯಾರು ನಿನ್ನ ಸಾಕ್ಷಾತ್ಕಾರದ ದರ್ಶನಕರ್ತನೋ ಮತ್ತು ನಿನ್ನ ಸುಗುಣಗಳ ಪ್ರಕಾಶಕನೋ ಅಂಥವನತ್ತ ಅವರು ತಮ್ಮ ದೃಷ್ಟಿಯನ್ನು ನೆಟ್ಟಿರುವರು.”

ಯಾವನು ನಿನ್ನ ಶಾಖೆಯಂತಿರುವನೋ ಅಲ್ಲದೆ ನಿನ್ನ ಒಡನಾಡಿಯಂತಿರುವನೋ, ಓ ಸ್ವಾಮಿಯೇ, ಅವನು ಈ ದಿವಸ ತನ್ನ ಉಪವಾಸವನ್ನು ಮುಕ್ತಾಯಗೊಳಿಸಿರುವನು. ನಿನ್ನ ಸಮಕ್ಷಮದಲ್ಲಿಯೇ, ನಿನ್ನನ್ನು ಸಂತೋಷಗೊಳಿಸಲು ಕೈಗೊಂಡ ಇದು ಮುಕ್ತಾಯವಾಗಿದೆ. ಅವನಿಗೂ, ಅವರಿಗೂ, ಅಲ್ಲದೆ ಈ ದಿನಗಳಲ್ಲಿ ನಿನ್ನ ಸಮ್ಮುಖದಲ್ಲಿ ನಿನ್ನ ವಿಧಿವತ್ತಾದ ಸತ್ಕರ್ಮಗಳನ್ನು ನಡೆಸಿದವರೆಲ್ಲರಿಗೂ ಗೌರವಿಸು. ಆತನ ಇಂದಿನ ಜನ್ಮದಲ್ಲಿ ಹಾಗೂ ಭವಿಷ್ಯ ಜನ್ಮಗಳಲ್ಲಿ ಅನುಕೂಲಿಸುವಂಥವುಗಳನ್ನು ಒದಗಿಸು. ವಾಸ್ತವಕ್ಕೂ ನೀನೇ ಎಲ್ಲವನ್ನೂ ಬಲ್ಲವ, ಸರ್ವಜ್ಞ.

 


English  
ភាសាខ្មែរ  
አማርኛ.  
Afrikaans  
Alaska Native  
American Indian  
Azərbaycan  
Bahasa Indonesia  
Bahasa Malaysia  
Bidayuh  
Bosanski  
Canadian Indigenous  
Català  
Cebuano  
Česky  
Chamorro  
Chichewa  
Corsica  
Cymraeg  
Daga  
Dansk  
Deutsch  
Dzongkha  
Eesti  
Español  
Esperanto  
Euskara  
Fiji  
Filipino  
Føroyar  
Français  
Frysk  
Hausa  
Hawaiian  
Hiri Motu  
Hrvatski  
Irish  
Íslenska  
Italiano  
Kabyle  
Kalaallisut  
Kiribati  
Kiswahili  
Kreyol Ayisyen  
Kuanua  
Kube  
Latviešu  
Lëtzebuergesch  
Lietuvių  
Luganda  
Magyar  
Malagasy  
Malti  
Māori  
Marshallese  
Melpa  
Montenegrin  
Nalik  
Namibia  
Nederlands  
Norsk  
Papiamentu  
Polski  
Português (BR)  
România  
Sámi  
Samoan  
Sarawak  
Sesotho  
Shqip  
Slovenščina  
Slovensky  
Sranan Tongo  
Srpski српски  
Suomi  
Svenska  
Tetum  
Tiếng Việt  
Tok Pisin  
Tongan  
Türkçe  
Türkmençe  
Tuvalu  
Vanuatu  
ελληνικά  
Беларускі  
български  
Кыргыз  
Монгол хэл  
Русский  
Тоҷикӣ  
Україна  
հայերեն  
اُردُو  
العربية  
فارسی  
नेपाली  
मराठी  
हिंदी  
বাংলা  
ગુજરાતી  
ଓଡ଼ିଆ  
தமிழ்  
తెలుగు  
ಕನ್ನಡ  
മലയാളം  
ภาษาไทย  
ພາສາລາວ  
한국어  
日本語  
简体中文  
繁體中文  
Windows / Mac