Return to BahaiPrayers.net
Facebook
(ಮಾರ್ಚ್ 21ನೇ ತಾರೀಖು ನೌರೂeóï ಇದು ಬಹಾಯಿ ವರ್ಷದ ಪ್ರಥಮ ದಿನ ಇದು ಸಂಭ್ರವದ ದಿನವಾಗಿದೆ.)
ಓ ನನ್ನ ಪರಮಾತ್ಮನೇ, ನೀನು ಧನ್ಯ. ನಿನ್ನ ಪ್ರೀತ್ಯರ್ಥವಾಗಿ ಹಾಗೂ ನಿನಗೆ ಅಸಹ್ಯವೆನಿಸುವ ಎಲ್ಲ ವಿಚಾರಗಳಿಂದಲೂ ದೂರದಿಂದಿರಲು ಸಂಕಲ್ಪಿಸಿ ಉಪವಾಸ ಮಾಡಿದವರಿಗೋಸ್ಕರ ನೀನು ನೌ-ರೂeóï ಸಂಭ್ರಮದ ಹಬ್ಬವನ್ನು ಗೊತ್ತುಪಡಿಸಿರುವೆ. ನಿನ್ನ ಪ್ರೀತಿಯ ಅಗ್ನಿ ಮತ್ತು ಉಪವಾಸದಿಂದ ಉತ್ಪನ್ನವಾದ ಶಾಖ ನಿನ್ನ ಧ್ಯೇಯೋದ್ದೇಶಗಳ ಸಲುವಾಗಿ ಧಗಧಗಿಸುವಂತೆ ಮಾಡಲಿ. ಅದು ಮಾತ್ರವಲ್ಲ, ಅವು ನಿನ್ನನ್ನು ಸ್ತುತಿಗೈಯುವುದರಲ್ಲಿ ಹಾಗೂ ಸ್ಮರಣೆ ಮಾಡುವುದರಲ್ಲಿ ನಿರತವಾಗುವಂತೆ ಕೃಪೆ ಮಾಡು, ಓ ಪ್ರಭುವೇ, ನೀನೇ ವಿಧಾಯಕಪಡಿಸಿದ ಉಪವಾಸದ ಆಭರಣದಿಂದ ಅವರನ್ನು ಸಿಂಗರಿಸಿರುವೆಯಾದ ಕಾರಣ ನಿನ್ನ ದಯೆ ಹಾಗೂ ಔದಾರ್ಯದ ಉಪಕಾರದಿಂದಲೂ ಮನ್ನಣೆಯಿಂದಲೂ ಕೂಡಿದಾ ಆಭರಣದಿಂದ ಸಹ ಅಲಂಕರಿಸುವವನಾಗು. ಮಾನವರ ನಡವಳಿಕೆಯೆಲ್ಲ ನಿನ್ನ ಸಮಾಧಾನ ಹಾಗೂ ಸಂತೋಷಚಿತ್ತದ ಅವಲಂಬನೆಯಾಗುತ್ತದೆ. ಅಷ್ಟೇ ಅಲ್ಲ, ನಿನ್ನ ಆಜ್ಞೆಯ ಆಧಾರದ ಮೇಲೂ ನಿಂತಿರುತ್ತದೆ. ಯಾರು ಉಪವಾಸವನ್ನು ಆಚರಿಸಿ, ಸತ್ಯಸಂಧನಾಗಿ ಮುಕ್ತಾಯಗೊಳಿಸುವನೋ ಅಂಥವನು ಚಿರಕಾಲದಿಂದಲೂ ಉಪವಾಸ ಮಾಡುತ್ತಿರುವವರ ಗುಂಪಿಗೆ ಸೇರಿಸಲ್ಪಡುವನು. ಅದಿಲ್ಲದೆ ನಿನ್ನ ಭಾವನೆಯಲ್ಲಿ ಯಾವನು ಉಪವಾಸವನ್ನು ಆಚರಿಸಿ ನಿಲ್ಲಿಸಿ ಬಿಡುವನೋ ಅವನು ನಿನ್ನ ಪವಿತ್ರ ಉದ್ದಿಶ್ಯಗಳಿಗೆ ಕಳಂಕ ತಂದವನೆಂದು ಪರಿಗಣಿಸಲ್ಪಡುವನು. ಈ ಜೀವಂತ ಚಿಲುಮೆಯ ಪರಿಶುದ್ಧವಾದ ಜಲದಿಂದ ಅವನು ಹೊರದೂಡಲ್ಪಡುವನು. ನಿನ್ನ ಮೂಲಕವೇ ನಿನ್ನ ಪ್ರಶಂಸನೀಯ ಕರ್ತವ್ಯ ಪ್ರಕಟವಾಗಿದೆ. ನಿನ್ನ ಆಜ್ಞೆಯ ಧ್ವಜವನ್ನೂ ಹಾರಿಸಿದೆ. ಇದನ್ನು ನಿನ್ನ ಆಜ್ಞಾಪಾಲಕರಿಗೆ ತಿಳಿಸು ಪ್ರಭುವೇ. ಎಲ್ಲ ವಸ್ತುಗಳ ಪವಿತ್ರತೆಯು ನಿನ್ನ ಇಚ್ಛೆ ಹಾಗೂ ಆದೇಶವನ್ನು ಅವಲಂಬಿಸುವುದೆಂದೂ ಅವರಿಗೆ ಗೊತ್ತು ಪಡಿಸು. ಅವರ ಪ್ರತಿ ಆಚಾರವೂ ನಿನ್ನ ಅನುಮತಿ ಮತ್ತು ಸಂತೋಷದ ವಿಧಿ ಬದ್ಧವಾಗಿದೆ. ಮಾನವರ ನಡವಳಿಕೆಗಳೆಲ್ಲವೂ ನಿನ್ನ ಸಮ್ಮತಿ ಮತ್ತು ಆಜ್ಞೆಗೆ ಅನುಸಾರವಾಗಿ ಉಳ್ಳದ್ದೆಂದು ಅಂಗೀಕರಿಸಬಹುದು. ಇದು ಅವರಿಗೆ ಗೊತ್ತಾಗುವಂತೆ ಮಾಡು. ಈ ದಿನಗಳಲ್ಲಿ ನಿನ್ನ ಸೌಂದರ್ಯದ ನೆಲೆಯಿಂದ ಯಾವುದೂ ಅವರನ್ನು ಮರೆಮಾಚಲು ಸಾಧ್ಯವಿಲ್ಲವೆಂದು ಅವರಿಗೆ ಸ್ಪಷ್ಟಪಡಿಸು. ಕ್ರಿಸ್ತ ಈ ದಿನಗಳಲ್ಲಿ ಹೀಗೆ ಹೇಳಿದ : “ಎಲ್ಲ ರಾಜ್ಯಗಳೂ ನಿನ್ನವು “ಓ ಚೈತನ್ಯ ಕರ್ತನೇ” ನಿನ್ನ ಮಿತ್ರ ಮೊಹಮ್ಮದ್ ಹೀಗೆ ಸಾರಿದ: “ ಓ ಉತ್ತಮೋತ್ತಮ ಪ್ರೀತಿಗೆ ಪಾತ್ರನಾದವನೇ, ನಿನ್ನ ಸೌಂದರ್ಯವನ್ನು ಬಹಿರಂಗಪಡಿಸಿರುವೆ. ನಿನ್ನ ವಿಶ್ವಾಸ ಪಾತ್ರರಿಗೆ, ಅತಿ ವೈಭವದ ನಿನ್ನ ಸಾಕ್ಷಾತ್ಕಾರದಲ್ಲಿ ಸ್ಥಾನ ಗಳಿಸುವ ಮಾರ್ಗವಾವುದು ಎಂಬುದನ್ನು ಖಚಿತಪಡಿಸಿರುವೆ. ಹೀಗೆ ನಿನ್ನ ಹೊರತು ಮಿಕ್ಕೆಲ್ಲ ವಸ್ತುಗಳಿಂದಲೂ ಬಾಹಿರರಾದವರನ್ನು ಬಿಟ್ಟು ಉಳಿದವರೆಲ್ಲ ದುಃಖಿಗಳಾಗಿರುವರು. ಯಾರು ನಿನ್ನ ಸಾಕ್ಷಾತ್ಕಾರದ ದರ್ಶನಕರ್ತನೋ ಮತ್ತು ನಿನ್ನ ಸುಗುಣಗಳ ಪ್ರಕಾಶಕನೋ ಅಂಥವನತ್ತ ಅವರು ತಮ್ಮ ದೃಷ್ಟಿಯನ್ನು ನೆಟ್ಟಿರುವರು.”
ಯಾವನು ನಿನ್ನ ಶಾಖೆಯಂತಿರುವನೋ ಅಲ್ಲದೆ ನಿನ್ನ ಒಡನಾಡಿಯಂತಿರುವನೋ, ಓ ಸ್ವಾಮಿಯೇ, ಅವನು ಈ ದಿವಸ ತನ್ನ ಉಪವಾಸವನ್ನು ಮುಕ್ತಾಯಗೊಳಿಸಿರುವನು. ನಿನ್ನ ಸಮಕ್ಷಮದಲ್ಲಿಯೇ, ನಿನ್ನನ್ನು ಸಂತೋಷಗೊಳಿಸಲು ಕೈಗೊಂಡ ಇದು ಮುಕ್ತಾಯವಾಗಿದೆ. ಅವನಿಗೂ, ಅವರಿಗೂ, ಅಲ್ಲದೆ ಈ ದಿನಗಳಲ್ಲಿ ನಿನ್ನ ಸಮ್ಮುಖದಲ್ಲಿ ನಿನ್ನ ವಿಧಿವತ್ತಾದ ಸತ್ಕರ್ಮಗಳನ್ನು ನಡೆಸಿದವರೆಲ್ಲರಿಗೂ ಗೌರವಿಸು. ಆತನ ಇಂದಿನ ಜನ್ಮದಲ್ಲಿ ಹಾಗೂ ಭವಿಷ್ಯ ಜನ್ಮಗಳಲ್ಲಿ ಅನುಕೂಲಿಸುವಂಥವುಗಳನ್ನು ಒದಗಿಸು. ವಾಸ್ತವಕ್ಕೂ ನೀನೇ ಎಲ್ಲವನ್ನೂ ಬಲ್ಲವ, ಸರ್ವಜ್ಞ.
- Bahá'u'lláh