Return to BahaiPrayers.net
Facebook
(ಕಷ್ಟದಲ್ಲಿದ್ದಾಗ ಅಥವಾ ತೊಂದರೆಯಲ್ಲಿದ್ದಾಗ ಇದನ್ನು ಪಠಿಸಿದರೆ ಪರಿಹಾರ ನೀಡುವ ವಿಶೇಷ ಶಕ್ತಿ ಈ ಶಾಸನಕ್ಕಿದೆ.)
ಅವನು ದೊರೆ, ಸರ್ವಜ್ಞ, ಸುಜ್ಞಾನಿ, ಆಲಿಸಿ, ಅನಂತ ಸ್ವರೂಪದ ಕೊಂಬೆಗಳ ಮೆಲೆ ಕುಳಿತು ಪವಿತ್ರ ಹಾಗೂ ಸುಮಧುರ ಧ್ವನಿಗಳಲ್ಲಿ ಭಕ್ತಸಮೂಹಕ್ಕೆ ಪರಮಾತ್ಮನ ಸಾಮೀಪ್ಯದ ಸಂತಸದ ಸುದ್ದಿಯನ್ನು ಸಾರುತ್ತ, ದೈವಿಕ ಏಕತೆಯಲ್ಲಿ ವಿಶ್ವಾಸವುಳ್ಳವರನ್ನೆಲ್ಲ ಔದಾರ್ಯ ಮೂರ್ತಿಯ ಸಾನ್ನಿಧ್ಯಕ್ಕೆ ಕರೆಯುತ್ತಾ, ವಿಯೋಗಿಗಳಿಗೆ, ದೊರೆ, ಮಹಾಪುರುಶ ಹಾಗೂ ಅಸಮಾನ್ಯ ದೇವರು ಪ್ರಕಟಿಸಿದ ಸಂದೇಶವನ್ನು ತಿಳಿಸುತ್ತಾ, ಪ್ರೇಮಿಗಳಿಗೆ ಪವಿತ್ರ ಜಾಗದ ದಾರಿ ತೋರುತ್ತಾ, ಅಷ್ಟೇ ಅಲ್ಲ, ಈ ಮಹೋಜ್ವಲ ರಮ್ಯತೆಯತ್ತ ನಡೆಸುತ್ತಾ ಸ್ವರ್ಗದ ನೈಟಿಂಗೇಲ್ ಪಕ್ಷಿಯು (ಬುಲ್ ಬುಲ್) ಹಾಡುತ್ತಿದೆ.
ಯಾರ ಮೂಲಕ ಸತ್ಯ ಮತ್ತು ಮಿಥ್ಯೆಗಳು ವಿಮರ್ಶಿಸಲ್ಪಟ್ಟು ಪ್ರತಿಯೊಂದು ಆದೇಶದ ಯುಕ್ತಾಯುಕ್ತತೆಯು ಪರೀಕ್ಷಿಸಲ್ಪಡುವುದೋ ಅಂಥ ದೇವದೂತರ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿರುವ ಮಹಾ ಸೌಂದರ್ಯವೇ ಇದು. ಸತ್ಯ ವಿಚಾರ, ಭಗವಂತನ ಪ್ರಸಾದರೂಪವಾದ ಫಲವನ್ನು ಬಿಡುವ ಜೀವಿತದ ಗಿಡವೇ ನಿಜಕ್ಕೂ ಅವನು. ಇಷ್ಟು ಮಾತ್ರವಲ್ಲ, ಅವನು ಉನ್ನತ, ಬಲಶಾಲಿ ಹಾಗೂ ಶ್ರೇಷ್ಠ.
ಓ ಅಹಮದ್, ಅವನೇ ಪರಮಾತ್ಮ, ನಿಜಕ್ಕೂ ಅವನಲ್ಲದೇ ಬೇರೆ ದೇವರಿಲ್ಲ ಎಂಬುದಕ್ಕೆ ನೀನೇ ಸಾಕ್ಷಿ, ದೊರೆ, ರಕ್ಷಕ, ಅನುಪಮ ಹಾಗೂ ಸರ್ವಶಕ್ತ ಎಂಬುದಕ್ಕೂ ಪ್ರಮಾಣ, “ಅಲಿ’ (ಭಗವಾನ್ ಬಾಬ್) ಎಂಬ ಹೆಸರಿನಲ್ಲಿ ಯಾವಾತನನ್ನು ಅವನು ಕಳುಹಿಸಿರುವನೋ ಅವನೆ ಪರಮಾತ್ಮನಿಂದ ಬಂದ ನಿಜ ವ್ಯಕ್ತಿಯಾಗಿರುವನು. ಈತನ ಆಜ್ಞೆಗೆ ನಾವೆಲ್ಲ ಬದ್ದರು. ಹೇಳು: ದಿವ್ಯ ಜ್ಞಾನಿಗಳ ಮೂಲಕ ಬಯಾನ್ನಲ್ಲಿ ವಿಧಿಸಲಾಗಿರುವ ಪರಮ್ಮಾನ ಆಜ್ಞೆಗಳನ್ನು, ಓ ಜನರೇ, ಪಾಲಿಸಿರಿ, ಸತ್ಯವಾಗಿಯೂ ಅವನು ದೇವದೂತರ ದೊರೆ. ಅವನು ಗ್ರಂಠ ಮಾತೃಸ್ವರೂಪದ ಗ್ರಂಥವಾಗಿದೆ ಎಂಬುದನ್ನು ತಿಳಿಯಿರಿ.
ಈ ಪ್ರಕಾರವಾಗಿ ನೈಟಿಂಗೇಲ್ ಪಕ್ಷಿಯು (ಬುಲ್ ಬುಲ್) ಈ ಸೆರೆಮನೆಯಿಂದ ನಿಮಗೆ ಕರೆಕೊಟ್ಟಿದೆ. ಈ ಖಚಿತ ಸಂದೇಶವನ್ನು ಸಾರುವುದು ಅದರ ಕರ್ತವ್ಯ. ಈ ಉಪದೇಶದಿಂದ ದೂರ ಸರಿಯಬೇಕೆಂಬ ಇಚ್ಛೆಯಿದ್ದವನು ಹಾಗೆ ಮಾಡಲಿ. ಬೇಕಿದ್ದವರು ಪರಮಾತ್ಮನ ಹಾದಿ ಹಿಡಿಯಲಿ. ಓ ಜನರೇ, ಈ ಮಾತುಗಳನ್ನು ತೃಣೀಕರಿಸುವಿರಾದರೆ ನೀವು ಯಾವ ಆಧಾರದ ಮೆಲೆ ಪರಮಾತ್ಮನನ್ನು ನಂಬಿದಿರಿ? ಓ ಕಪಟಿಗಳ ಗುಂಪೇ, ಆ ಆಧಾರಗಳನ್ನು ಮುಂದೆ ತನ್ನಿ.
ಸಾಧ್ಯವಿಲ್ಲ ಯಾರ ಹಸ್ತದಲ್ಲಿ ನನ್ನ ಆತ್ಮವಿದೆಯೋ ಅಂತಹವರಿಂದಲೂ ಅವರೆಲ್ಲರೂ ಒತ್ತಟ್ಟಿಗೆ ಕಲೆತು ಒಬ್ಬರಿಗೊಬ್ಬರು ಸಹಾಯವೆಸಗಿದರೂ ಆಗದ ಕಾರ್ಯವೇ ಹೌದು. ಓ ಅಹಮದ್, ನಾನಿಲ್ಲದಿದ್ದರೂ ಸಹ ನನ್ನ ಕೊಡುಗೆಯನ್ನು ಮರೆಯಬೇಡ. ನಿನ್ನ ಕಾಲದಲ್ಲಿ ನನ್ನ ದಿನಗಳನ್ನು ಸ್ಮರಿಸಿಕೋ, ಈ ಸೆರೆಮನೆಯಲ್ಲಿನ ನನ್ನ ಸಂಕಟ ಹಾಗೂ ದೇಶ ಭ್ರಷ್ಟತೆಯ ಪಾಡನ್ನು ಜ್ಞಾಪಿಸಿಕೋ. ನಿನ್ನ ಮೇಲೆ ಶತೃಗಳ ಖಡ್ಗಗಳು ಪೆಟ್ಟಿನ ಮೇಲೆ ಪೆಟ್ಟುಗಳನ್ನು ಹಾಕುತ್ತಿದ್ದರೂ, ಸ್ವರ್ಗ ಹಾಗೂ ಭೂಮಿ ನಿನ್ನ ಮೆಲೆ ಎರಗಿಬಿದ್ದು ಘಾತಿಸುತ್ತಿದ್ದರೂ ನನ್ನ ಬಗ್ಗೆ ನಿನ್ನ ಪ್ರೇಮ ಅಚಲವಾಗಿರಲಿ. ನಿನ್ನ ಹೃದಯ ಚಂಚಲವಾಗದಿರಲಿ. ನನ್ನ ಶತೃಗಳೀಗೆ ನೀವು ಬೆಂಕಿಯ ಜ್ವಾಲೆಯಂತಿರಿ. ನನ್ನ ಪ್ರೀತಿಪಾತ್ರರಿಗೆ ಆನಂತ ಜೀವ ಸಂಶಯಪಡುವಂತಹ ಜನರಂತಾಗದಿರಿ.
ನನ್ನ ಹಾದಿ ಹಿಡಿದಾಗ ನಿಮಗೆ ಕಷ್ಟಪ್ರಾಪ್ತವಾದರೆ ಅಥವಾ ನನ್ನ ದೆಶೆಯಿಂದ ಅಪಮಾನಿತರಾದಾಗ ಅದಕ್ಕಾಗಿ ವ್ಯಥೆ ಪಡದಿರಿ. ಭಗವಂತನನ್ನು, ನಿಮ್ಮ ಭಗವಂತನನ್ನು ಹಾಗೂ ನಿಮ್ಮ ಪೂರ್ವಜರ ಪ್ರಭುವನ್ನು ನಂಬಿ. ಎಕೆಂದರೆ ಜನರು ಭ್ರಮೆಯ ಮಾರ್ಗದಲ್ಲಿ ಅಲೆದಾಡುತ್ತಿದ್ದು, ತಮ್ಮ ಕಣ್ಣುಗಳಿಂದ ಭಗವಂತನನ್ನು ದರ್ಶಿಸುವ ಭಾಗ್ಯವಿಹೀನರಾಗಿ ಅಥವಾ ತಮ್ಮ ಕಿವಿಗಳಿಂದ ಅವನ ಸುಮಧುರ ಧ್ವನಿಯನ್ನು ಕೇಳುವ ಸದಾವಕಾಶವನ್ನು ಕಳೆದುಕೊಂಡಿದ್ದಾರೆ. ಹೀಗೆ ನಾವು ಅವರನ್ನು ಕಂಡಿದ್ದೇವೆ. ನೀನೂ ಸಹ ಸಾಕ್ಷೀಭೂತನಾಗಿದ್ದೀಯೇ.
ಈ ತೆರನಾಗಿ ಅವರ ಅಂಧಶ್ರದ್ದೆ ಅವರ ಮತ್ತು ಅವರ ಅಂತರಂಗಗಳ ಮಧ್ಯೆ ಮುಸುಕಿನ ಪರದೆಯಂತಾಗಿದ್ದು, ಸರ್ವೋತ್ತಮ ಹಾಗೂ ಮಹಾಮಹಿಮನಾದ ಭಗವಂತನ ಮಾರ್ಗದಿಂದ ದೂರ ಸರಿಯುವಂತೆ ಮಾಡಿದೆ. ಯಾವನು ಈ ಸೌಂದರ್ಯದಿಂದ ಅತೀತನಾಗುವನೋ ಅವನು ಗತಕಾಲದ ದೇವದೂತರಿಂದಲೂ ಅತೀತನಾಗುವನೆಂದು ಭರವಸೆ ಹೊಂದಿ. ಅನಂತದಿಂದ ಅನಂತ ದಿಶೆಯವರೆಗೂ, ಅವನು ಭಗವಂತನ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದಂತೆಯೇ, ಇದು ಸತ್ಯ.
ಈ ಶಾಸವನ್ನು ಓ ಅಹಮದ್, ಚೆನ್ನಾಗಿ ಕಲಿ, ಅಭ್ಯಾಸ ಮಾಡು. ಉಚ್ಚರಿಸು, ಕೈಬಿಡಬೇಡ. ಏಕೆಂದರೆ ಪರಮಾತ್ಮ ಹೀಗೆ ವಿಧಾಯಕ ಮಾಡಿದ್ದಾನೆ. ಯಾರು ಇದನ್ನು ಪಠಿಸುವರೋ ಅಂಥವರಿಗೆ ನೂರು ಹುತಾತ್ಮರ ಬಹುಮಾನವನ್ನೂ ಎರಡು ಲೋಕಗಳ ಸೇವಾವಕಾಶವನ್ನು ದಯಪಾಲಿಸುವನು. ನಾವು ನಿಮಗೆ ಈ ಕರುಣೆಯನ್ನು ಅನುಗ್ರಹಿಸಿದ್ದೇವೆ. ನಮ್ಮ ಸಾನಿಧ್ಯದಿಂದ ದಯೆ ತೋರಿದ್ದೇವೆ. ಕೃತಜ್ಞತಾ ವ್ಯಕ್ತಿಗಳಲ್ಲಿ ನೀವು ಒಳಗೊಂಡಿರಿ ಯಾರು ಕಷ್ಟ ಹಾಗೂ ಸಂಕಟಕ್ಕೊಳಗಾಗಿರುವವರು ಸಂಪೂರ್ಣ ನಿಷ್ಠೆಯಿಂದ ಈ ಶಾಸವನ್ನು ಪಠಿಸುವನೋ ಅವನ ದುಃಖವನ್ನು ಭಗವಂತ ದೂರ ಮಾಡುವನು, ಅವನ ಕಷ್ಟಗಳನ್ನು ನಿವಾರಿಸುವನು, ತೊಂದರೆಗಳನ್ನು ಪರಿಹರಿಸುವನು.
ವಾಸ್ತವವಾಗಿ ಅವನು ದಯಾನಿಧಿ, ಕರುಣಾಮಯಿ ಸಕಲ ಲೋಕದೊಡೆಯನಾದ ಪರಮಾತ್ಮ ಧನ್ಯ ಪ್ರಶಂಸನೀಯ.
- Bahá'u'lláh