Return to BahaiPrayers.net
Facebook
(ಏಪ್ರಿಲ್ 21ರಿಂದ ಮೇ ತಿಂಗಳ 2ರವರೆಗೆ ಆಚರಿಸಲ್ಪಡುವ ರಿದ್ವಾನ್ ಹಬ್ಬವು ತಮ್ಮ ಅನುಯಾಯಿಗಳಿಗೆ
ರವರು ಮಾಡಿರುವ ತಮ್ಮ ಧ್ಯೇಯದ ಮಹಾಘೋಷಣೆಯ ಸ್ಮರಣೋತ್ಸವವಾಗಿದೆ.
ರವರು ಇದನ್ನು “ಹಬ್ಬಗಳ ರಾಜ” ಎಂದು ಘೋಷಿಸಿರುವರು ಹಾಗೂ ತಮ್ಮ ಪರಮ ಪಾವನ ಗ್ರಂಥವಾದ ಕಿತಾಬ್-ಈ-ಅಕ್ದಾಸ್ದಲ್ಲಿ ಇದನ್ನು “ಸಮಸ್ತ ಸೃಷ್ಟಿಯು ಪಾವನತೆಯ ಸಾಗರದಲ್ಲಿ ವಿಲೀನ”ವಾಗಿರುವ ಮಹಾದಿನಕ್ಕೆ ಹೋಲಿಸಿರುವರು.)
ಓ ಮಹಾಲೇಖನಿಯೇ, ದಿವ್ಯವಾದ ವಸಂತ ಋತುವಿನ ಆಗಮನವಾಗಿದೆ. ಏಕೆಂದರೆ, ಸರ್ವಕೃಪಾಕರನ ಮಹೋತ್ಸವವು ಸಮೀಪಿಸುತ್ತಿದೆ. ಸಕಲ ಸೃಷ್ಟಿಯು ಪುನರುಜ್ಜೀವಿತಗೊಂಡು ನವೀನವಾಗುವಂತೆ ಸಂಪೂರ್ಣ ಸೃಷ್ಟಿಯೆದುರು ದೇವರ ನಾಮವನ್ನು ಹೊಗಳಿ ಆತನ ಸ್ತೋತ್ರವನ್ನಾಚರಿಸಲು ಸ್ವಯಂ ಉತ್ಸಾಹದಿಂದ ಸಿದ್ಧತೆ ಮಾಡಿ. ಮೌನದಿಂದಿರಬೇಡಿ, ಮಾತನಾಡಿ, ಪರಮ ಸುಖದ “ನಮ್ಮ ಹೆಸರಿನ” ದಿಗಂತದಲ್ಲಿ ಸುಖಪ್ರದ ದಿನ ನಕ್ಷತ್ರವು ಕಂಗೊಳಿಸುತ್ತಿದೆ. ಏಕೆಂದರೆ ದೇವರ ಹೆಸರಿನ ಸಾಮ್ರಾಜ್ಯವು ಸ್ವರ್ಗಗಳ ಸೃಷ್ಟಿಕರ್ತ, ನಿನ್ನ ಪ್ರಭುವಿನ ನಾಮದ ಆಭರಣದಿಂದ ಅಲಂಕೃತಗೊಂಡಿರುವುದು. ಈ ಮಹಾಮಹಿಮೆ ಹೆಸರಿನ ಶಕ್ತಿಯಿಂದ ಸುಸಜ್ಜಿತರಾಗಿ ಪೃಥ್ವಿಯ ರಾಷ್ಟಗಳೆದುರು ಎದ್ದುನಿಲ್ಲಿ, ತಡಮಾಡಿ ಕಾದಿರುವವರಲ್ಲಿ ಒಬ್ಬರಾಗದಿರಿ. . . .
ಇದು ಎಂಥ ಯುಗವೆಂದರೆ ಅದೃಶ್ಯ ಜಗತ್ತು ಈ ರೀತಿ ಕೂಗಿ ಹೇಳುತ್ತಿದೆ: “ಓ ವಸುಂಧರೇ, ನೀನು ಸೌಭಾಗ್ಯಶಾಲಿಯಾಗಿರುವೆ, ಏಕೆಂದರೆ, ನಿನ್ನ ದೇವರ ಪರಮ ಪಾವನ ಹೆಜ್ಜೆಯನ್ನಿಟ್ಟಿರುವ ಸ್ಥಳ ನಿನ್ನದಾಗಿದ್ದು, ಆತನ ಭವ್ಯ ಸಿಂಹಾಸನದ ಪೀಠವನ್ನಾಗಿ ನಿನ್ನನ್ನು ಅಯ್ಕೆ ಮಾಡಲಾಗಿದೆ”. ಭವ್ಯತೆಯ ಸಾಮ್ರಾಜ್ಯವು ಉದ್ಗಾರವೆತ್ತಿದೆ: “ನಿನಗೋಸ್ಕರ ನನ್ನ ಜೀವವೇ ಸಮರ್ಪಿತವಾಗಲಿ. ಏಕೆಂದರೆ, ಭೂತ ಕಾಲದಲ್ಲಾಗಲೀ ಭವಿಶ್ಯತ್ತಿನಲ್ಲಾಗಲೀ ನಿನ್ನ ಹೆಸರಿನ ಶಕ್ತಿಯ ಮೂಲಕ ಎಲ್ಲಾ ವಸ್ತುಗಳಿಗೂ ವಚನವಿತ್ತಂಥ ಆತನ ಸಾಮ್ರಾಜ್ಯವನ್ನು ಸರ್ವಕೃಪಾಕರನ ಪ್ರಿಯತಮನು ನಿನ್ನ ಮೇಲೆ ಸ್ಥಾಪಿಸಿರುವನು. . . . “
ಪರಮ ಪ್ರಿಯತಮನು ಬಂದಿಹನು. ಆತನ ಬಲಗೈಯಲ್ಲಿ ಆತನ ನಾಮದ ಮದಿರೆಯಿದೆ. ಆತನತ್ತ ತಿರುಗಿ, ಸಂಪೂರ್ಣವಾಗಿ ಪಾನ ಮಾಡಿ ಉದ್ಗಾರವೆತ್ತುವವನೇ ಸಂತುಷ್ಟನು : “ನಿನಗೆ ಪ್ರಶಂಸೆಯಾಗಲಿ, ಓ ದೇವರ ಚಿಹ್ನೆಗಳನ್ನು ಪ್ರಕಟಗೊಳಿಸಿದವನೇ!” ಸರ್ವಶಕ್ತನ ಪಾವನತೆಯಿಂದ! ಪ್ರತಿಯೊಂದು ಗುಪ್ತ ವಸ್ತುವೂ ಸತ್ಯದ ಶಕ್ತಿಯ ಮೂಲಕ ವ್ಯಕ್ತಗೊಂಡಿದೆ. ದೇವರ ಎಲ್ಲಾ ಅನುಗ್ರಹಗಳೂ ಆತನ ಕೃಪೆಯ ಕುರುಹಾಗಿ ಕೆಳಗೆ ಕಳುಹಿಸಲ್ಪಟ್ಟಿವೆ. ಅಮರ ಜೀವನ ಜಲವನ್ನು ಮನವರಿಗಾಗಿ ಸಂಪೂರ್ಣವಾಗಿ ಸಮರ್ಪಿಸಲಾಗಿದೆ. ಪ್ರತಿಯೊಂದು ಬಟ್ಟಲು ಕೂಡಾ ಸರ್ವಪ್ರಿಯಕರನ ಕೈಯ ಸ್ಪರ್ಷ ಪಡೆದಿದೆ. ಒಂದು ಕ್ಷಣಕ್ಕಾದರಾಗಲೀ ತಡಮಾಡದೇ ಸಾಮೀಪ್ಯಕ್ಕೆ ಬನ್ನಿ.
ಓ ಬಹಾರ ಜನರೇ, ಸರ್ವಕೃಪಾಕರನು ಆತನ ಮನೆಯಿಂದ ಪವಿತ್ರ ಸ್ಥಾನದೆಡೆ ಮುಂದೆ ಸಾಗುತ್ತ ಸಂಪೂರ್ಣ ಸೃಷ್ಟಿಯ ಮೇಲೆ ಆತನ ನಾಮದ ವೈಭವವನ್ನು ಸಾರುತ್ತಿದ್ದಂತೆ, ಪುರಾತನ ಕಾಲದ ಜಿಹ್ವೆಯ ವಚನವಿತ್ತಂತಹ ಪರಮಾನಂದದ ದಿನದ ಸ್ಮರಣೆಯನ್ನು ಆತ್ಯಾನಂದದಿಂದ ಸಂಭ್ರಮಿಸಿ. ದೇವರೇ ನಮ್ಮ ಸಾಕ್ಷಿಯಾಗಿರುವನು. ನಾವೇನಾದರೂ ಅ ದಿನದ ಗುಪ್ತ ರಹಸ್ಯಗಳನ್ನು ಪ್ರಕಟಿಸಿದ್ದೇ ಆದರೆ, ಪರಾಕ್ರಮಿಯೂ, ಸರ್ವಜ್ಞನೂ, ಸರ್ವ ವಿವೇಕಿಯೂ ಆದ ದೇವರು ರಕ್ಷಿಸಬಹುದಾದವರನ್ನು ಬಿಟ್ಟು ಉಳಿದ, ಈ ಭೂಮಿ ಮತ್ತು ಸ್ವರ್ಗಗಳ ನಿವಾಸಿಗಳೆಲ್ಲರೂ ಮೂರ್ಛಿತರಾಗಿ ಸಾಯಬಹುದು. . . . . . (ಗ್ಲೀನಿಂಗ್ಸ್)
- Bahá'u'lláh